ಹಾಲೀವುಡ್ ಟು ಸ್ಯಾಂಡಲ್ ವುಡ್ ? ಮುಂಗ್ ಪಯಣ
Posted date: 21 Sun, Oct 2012 ? 06:05:16 PM
ಮೊದಲೇ ಹೇಳಿದಂತೆ ಅಣಜಿ ನಾಗರಾಜ್ ಅವರ ಪ್ರೊ ನ೦ ೬ ತ್ರಿ ಭಾಷಾ ಚಿತ್ರಕ್ಕೆ ಹಾಲೀವುಡ್ ಇಂದ ಚೇಸ್ ದೃಶ್ಯಗಳನ್ನು ಸೆರೆ ಹಿಡಿಯುವ ನಿಪುಣ ಬರುತ್ತಾರೆ ಎಂದು. ಅವರೇ ಮುಂಗ್ ಸಾಹಸ ನಿರ್ದೇಶಕ. ಭಯಂಕರ ಚೇಸ್ ಒಂದನ್ನು ಮುಂಗ್ ಅವರ ತಂಡ ಬಾಂಗ್ ಬ್ರಿಕ್ಸ್ ಮೈ ನವಿರೇಲಿಸುವ ಸಾಹಸವನ್ನು ಸೆರೆಹಿಡಿದಿದೆ. 
ನಿರ್ಮಾಪಕ, ಹೆಸರಾಂತ ಛಾಯಾಗ್ರಾಹಕ ಸ್ನೇಹಜೀವಿ ಅಣಜಿ ನಾಗರಾಜ್ ಮತ್ತೊಂದು ಸಾಹಸವನ್ನು ಮೂರು ಭಾಷೆಗಳಲ್ಲಿ ಚಿತ್ರ ಮಾಡಲು ಆರಂಬಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಇದೀಗ ರಾಜ್ಯ, ವಿದೇಶದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ ಸ್ವಲ್ಪ ಪ್ಯಾಚ್ ಕೆಲಸ ಬಾಕಿ ಜೊತೆಗೆ ಒಂದು ಹಾಡನ್ನು ಮಾತ್ರ ಬಾಕಿ ಉಳಿಸಿಕೊಂಡಿರುವ ಸುದ್ದಿ ತಲುಪಿದೆ. ಚಿತ್ರಕ್ಕೆ ಬೇಕಾದ ಒಂದು ಅದ್ಬುತ ಶೀರ್ಷಿಕೆಯ ಹುಡುಕಾಟದಲ್ಲಿ ಅಣಜಿ ನಾಗರಾಜ್ ಅವರು ಇದ್ದರೆ. ನಮನ ಫಿಲ್ಮ್ಸ್ ಅಡಿಯಲ್ಲಿ ‘ಪ್ರೊ ನ೦ ೬’ ಎಂದು ತಯಾರಿ ಶುರು ಮಾಡಿದ ವಿಜಯಕಿರಣ್ (ಪ್ರತಾಪ್) ಹಾಗೂ ನವ್ನೀತ್ ಕೌಶಿಕ್ ನಿರ್ದೇಶಕ ದ್ವಯರ ತಂಡ ಬ್ಯಾಂಕಾಕ್ ಅಲ್ಲಿ ಹಲವಾರು ದಿವಸಗಳ ಚಿತ್ರೀಕರಣ ಮಾಡಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಹ ನಿರ್ದೇಶಕ ದ್ವಯರು ಮಾಡಿದ್ದಾರೆ. 
ಶ್ರೀನಗರ ಕಿಟ್ಟಿ. ಶ್ರೇಯಸ್ ತಲ್ಪಡೆ ಖ್ಯಾತ ಹಿಂದಿ ಸಿನೆಮಾ ನಟ ಹಾಗೂ ಥಾಯಿ ಬಾಜ್ಪೈ ಮುಖ್ಯ ಪಾತ್ರದಲ್ಲಿ ಇರುವ ಚಿತ್ರ ಮನರಂಜನೆ ಜೊತೆಗೆ ಕೌತುಕ ನಿರೂಪಣೆಯನ್ನು ಹೊಂದಿದೆ. ಪಿಂತೊ ಘೋಷ್, ರಾಜೀವ್ ಕಂಕಲ ಸಹ ತಾರಾಗಣದಲ್ಲಿ ಇದ್ದಾರೆ. 
ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಎಂದು ಹೇಳುವ ನಾಯಕ ಶ್ರೀನಗರ ಕಿಟ್ಟಿ ಹಲವಾರು ಕುತೂಹಲ ಕಟ್ಟಿಕೊಂಡಿರುವ ಚಿತ್ರ ಎನ್ನುತ್ತಾರೆ. ಮೊದಲ ಹೆಜ್ಜೆ ಕನ್ನಡದಲ್ಲಿ ಹಾಕುತ್ತಿರುವ ಹಿಂದಿ ಸಿನೆಮಾ ನಟ ಶ್ರೇಯಸ್ ತಲ್ಪಡೆ ಸಂತೋಷದಿಂದ ಚಿತ್ರಕತೆಯ ಬಗ್ಗೆ ಹಾಗೂ ಚಿತ್ರೀಕರಣದ ಬಗ್ಗೆ ಇದ್ದಾರೆ.  
ಮಂಜು ಮಾಂಡವ್ಯ ಸಂಭಾಷಣೆ ಶೇಖಡ ೮೦ ರಷ್ಟು ರಸ್ತೆಗಳಲ್ಲಿ ಚಲಿಸುವ ಚಿತ್ರಕ್ಕೆ ಮಾತುಗಳು ವಿಭಿನ್ನ ಆಗಿದೆ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. 
ರಾಜೇಶ್ ಖಟ್ಟ ಅವರ ಛಾಯಾಗ್ರಹಣ, ಹರ್ಷ ಹಾಗೂ ಸಬೀನ ಖಾನ್ ಅವರ ನೃತ್ಯ ನಿರ್ದೇಶನ, ಸದ್ಯದ ಮತ್ತೊಂದು ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವರು. ಪಳನಿರಾಜ್ ಅವರ ಸಾಹಸ ಸಂಯೋಜನೆ ಇದೆ, ಕವಿರಾಜ್ ಅವರ ಸಾಹಿತ್ಯ ಸಹ ಈ ಚಿತ್ರಕ್ಕಿದೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed